top of page
  • Abhiram K Bairy

ತಲೆಬುಡವಿಲ್ಲ!!!

ಈ ತಂಪು ಬಿಸಿಲಿನಲಿ

ಈ ಸುಡುವ ನೆರಳಿನಲಿ

ಎತ್ತ ನೋಡಿದರೂ ನೀರವ ಮೌನ.


ಆಗ ಕೇಳಿದನು ಸೂರ್ಯ

ಏನಾಯಿತು ಓ ಮಗುವೇ?

ನಾ ಉತ್ತರಿಸಿದೆ,

ಕೇಳಿ ಓ ಪ್ರಭುವೆ,

ಗೊಂದಲಮಯ ಯೋಚನೆಗಳು,

ತಲೆಬುಡವಿರದ ಚಿಂತನೆಗಳು,

ಸಾಗರದಂಚನು ಮುಟ್ಟುವ ಬಯಕೆ,

ಆದರೆ ಈ ಜಗತ್ತು ಮೂಡಿಸುವುದು

ನನ್ನಲಿ ಅಪನಂಬಿಕೆ.


ಈ ನಡುವೆ ಅನಿಸುತಿದೆ

ಅವಳೇ ನನ್ನ ಮದನಿಕೆ.

ಹೋಗಿ ಹೇಳಬೇಕೆನಿಸುವುದು,

ನಾ ಅಭಿರಾಮನಾದರೆ ನೀನಾಗು ಎನ್ನಯ ಅಭಿಸಾರಿಕೆ.

ಆದರೆ ಒಂದೇ ಭಯ

ತರುವಳೇನೋ ಹೊಡೆಯಲು ಪೊರಕೆ.


ಸಂತೈಸಿದನು ಸೂರ್ಯ,

ಇರಲಿ ಜೀವನದಲ್ಲಿ ಧೈರ್ಯ

ಆಗುವುದೆಲ್ಲವೂ ಒಳ್ಳೆಯದಕ್ಕೆ

ಕುಗ್ಗಿಸಿಕೊಳ್ಳದಿರು ನಿನ್ನ ಆತ್ಮಸ್ಥೈರ್ಯ.

30 views

Comments


bottom of page